Friday, October 16, 2009

Empathy!

ನಾನು ಒಮ್ಮೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ನಡೆದ ಘಟನೆ- ಒಂದು ನಾಯಿ ಮರಿ, ರಸ್ತೆಯನ್ನ ದಾಟುವುದಕ್ಕೆ ಪ್ರಯತ್ನಿಸ್ತಾ ಇತ್ತು, ಆದರೆ ಅದಕ್ಕೆ ಕಾಲು ಊನ, ಹಾಗಾಗಿ ಬಹಳವೇ ಕಷ್ಟಪಟ್ಟು ನಡೆಯಲು ಪ್ರಯತ್ನಿಸುತ್ತಾ ಇತ್ತು, ನಿಂತ ನನ್ನಂತ ಅನೇಕರಿಗೆ ತಳಮಳ-'ಇನ್ನೇನು ಸಿಗ್ನಲ್ ಟೈಮ್ ಆಗುತ್ತೆ, ನಾಯಿ ಇನ್ನು ಅರ್ಧ ದಾರಿ ಕ್ರಮಿಸಿದೆಯಷ್ಟೇ ' ಅಂತ...ಎಲ್ಲಿಂದಲೋ ಒಬ್ಬ ಪುಣ್ಯಾತ್ಮ, ಬಂದು ಆ ಮರಿಯನ್ನ ಎತ್ತಿಕೊಂಡು ಹೊರಟರು, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊರಟೆ, ಹಾಗೆ ಹೋಗುತ್ತಾ ರಸ್ತೆಯ ಬದಿಗೆ ಹೊರಳಿ ನೋಡಿದೆ-ನಾಯಿಯನ್ನ ಕೆಳಗಿಳಿಸಿದರು ಅವರು, ತಾವು ನಡೆದುಕೊಂಡು ಹೊರಟರು, ಆಗ ಗಮನಿಸಿದೆ- ಆ ವ್ಯಕ್ತಿಗೂ ಕಾಲು ಊನ ಅಂತ! ನನ್ನ ಮನಸಿನಲ್ಲಿ ಈ ಘಟನೆ ಉಳಿದು ಹೋಗಿದೆ-ಕೆಲವರೇ ಮಹಾತ್ಮರು ಯಾಕೆ ಆಗುತ್ತಾರೆ ಅಂತಲೂ ನನಗೆ ತಿಳಿವು ನೀಡಿದ ಘಟನೆ ಇದು.

1 comment:

  1. after long time...why you are not writting.

    ReplyDelete