Friday, October 9, 2009

'ಹುಟ್ಟು' 'ಸಾವು' ಯಾರ ಕೈಯಲ್ಲೂ ಇಲ್ಲ ಅನ್ನುವುದನ್ನ ದೈನಂದಿನ ಜೀವನದಲ್ಲಿ ಕಾಣ್ತಾನೆ ಇರ್ತಿವಿ...YSR ಹಾಗೆ ಪ್ರಸ್ತುತ ಪ್ರವಾಹದಲ್ಲಿ ಆದ ಪ್ರಾಣಹಾನಿ, ಅಪಘಾತಗಳು, ಹೀಗೆ...ಆದರೆ ಯಾರ ಜೀವಕ್ಕೆ ಹೆಚ್ಚು ಬೆಲೆ ಅಂತ ಯಾರಿಗಾದರೂ ನಿರ್ಧರಿಸುವ ಹಕ್ಕಿದೆಯ? ವ್ಯಕ್ತಿಯೋರ್ವ ಉನ್ನತ ಸ್ಥಾನದಲ್ಲಿದ್ದಾನೆ ಅಂದ ಕೂಡಲೇ, ಅವನ ಪ್ರಾಣ ಕಾಪಾಡಲಿಕ್ಕೆ ಏನೆಲ್ಲ ಮಾಡಬಹುದೋ ಎಲ್ಲವನ್ನೂ ಮಾಡುವುದು, ಮಾಡಲಿ ಒಳ್ಳೆಯದೇ, ಆದರೆ ಅದರಷ್ಟಲ್ಲವಾದರೂ ಅದರ ಅರ್ಧದಷ್ಟದರೂ ಪ್ರಯತ್ನ ಸಾಮಾನ್ಯ ಜನರಿಗೆ ಮಾಡುವುದಿಲ್ಲ ಏಕೆ? ಅದರಲ್ಲೂ ತಮ್ಮ ಸ್ವಾರ್ಥ ಸಾಧನೆ ನೋಡಬೇಕೇ? ನಮ್ಮ ವ್ಯವಸ್ಥೆಯ ದುರಂತ :(

Wednesday, October 7, 2009

ತೆರೆದಷ್ಟೇ ಬಾಗಿಲು..

ಮತ್ತೇ.... ಯಾವುದರ ಬಗ್ಗೆಯಾದರೂ ಹುಚ್ಚು ಹಿಡಿದು ಮಾಡಿದಾಗ ಅಲ್ಲಿ ಹುಟ್ಟುವಂಥದ್ದು ವಿಶಿಷ್ಟವಾಗಿಯೇ ಇರುತ್ತೆ... ಗೀತೆ ಹೇಳಿದ್ದನ್ನು ಒಪ್ಪುತ್ತೇನೆ, ಎಲ್ಲರೂ ಮಾಡುವಂಥದ್ದನ್ನು ಸುಮ್ಮನೆ follow ಮಾಡದೆ ಅದರ ಆಚೆ ನಿಂತು ನೋಡಿದರೇನೇ ಅಸಾಧಾರಣವಾದದ್ದು ಏನೋ ಸಿಗುವುದು!
Title: ಜಯಂತ ಕಾಯ್ಕಿಣಿಯವರಿಂದ ಕದ್ದದ್ದು