Friday, October 16, 2009

Empathy!

ನಾನು ಒಮ್ಮೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ನಡೆದ ಘಟನೆ- ಒಂದು ನಾಯಿ ಮರಿ, ರಸ್ತೆಯನ್ನ ದಾಟುವುದಕ್ಕೆ ಪ್ರಯತ್ನಿಸ್ತಾ ಇತ್ತು, ಆದರೆ ಅದಕ್ಕೆ ಕಾಲು ಊನ, ಹಾಗಾಗಿ ಬಹಳವೇ ಕಷ್ಟಪಟ್ಟು ನಡೆಯಲು ಪ್ರಯತ್ನಿಸುತ್ತಾ ಇತ್ತು, ನಿಂತ ನನ್ನಂತ ಅನೇಕರಿಗೆ ತಳಮಳ-'ಇನ್ನೇನು ಸಿಗ್ನಲ್ ಟೈಮ್ ಆಗುತ್ತೆ, ನಾಯಿ ಇನ್ನು ಅರ್ಧ ದಾರಿ ಕ್ರಮಿಸಿದೆಯಷ್ಟೇ ' ಅಂತ...ಎಲ್ಲಿಂದಲೋ ಒಬ್ಬ ಪುಣ್ಯಾತ್ಮ, ಬಂದು ಆ ಮರಿಯನ್ನ ಎತ್ತಿಕೊಂಡು ಹೊರಟರು, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊರಟೆ, ಹಾಗೆ ಹೋಗುತ್ತಾ ರಸ್ತೆಯ ಬದಿಗೆ ಹೊರಳಿ ನೋಡಿದೆ-ನಾಯಿಯನ್ನ ಕೆಳಗಿಳಿಸಿದರು ಅವರು, ತಾವು ನಡೆದುಕೊಂಡು ಹೊರಟರು, ಆಗ ಗಮನಿಸಿದೆ- ಆ ವ್ಯಕ್ತಿಗೂ ಕಾಲು ಊನ ಅಂತ! ನನ್ನ ಮನಸಿನಲ್ಲಿ ಈ ಘಟನೆ ಉಳಿದು ಹೋಗಿದೆ-ಕೆಲವರೇ ಮಹಾತ್ಮರು ಯಾಕೆ ಆಗುತ್ತಾರೆ ಅಂತಲೂ ನನಗೆ ತಿಳಿವು ನೀಡಿದ ಘಟನೆ ಇದು.

Thursday, October 15, 2009

ಮನುಷ್ಯ -ವಿರೋಧಾಭಾಸಗಳ ಗೂಡು!

'ನೆರೆ-ಹಾವಳಿ '.....ಎಲ್ಲರ ಬಾಯಲ್ಲಿಯೂ ಸಂತಾಪ, ಅಸಂಖ್ಯಾತ ಜನರು ಸಹಾಯ ಹಸ್ತ ಚಾಚಿದ್ದಾರೆ. ಆದರೆ ದಿನದಲ್ಲಿ ಎರೆಡು ಗಂಟೆ ಹೆಚ್ಚು ದುಡಿಯಬೇಕೆಂದ ಕೂಡಲೇ ಏನಿದು ಅಪಸ್ವರ!ಅದೂ ಒಂದು ನಿರ್ಧಿಷ್ಟ ಅವಧಿಯವರೆಗೆ ಮಾತ್ರ. 'ಅದು ಅವೈಜ್ಞಾನಿಕ' ಅಂತ ಕೂಡ ವಿಮರ್ಶಿಸಿದ್ದಾರೆ, ಆಯಾ ಪ್ರದೇಶದ ಜನರು ಮಾತ್ರ ದುಡಿದರೆ ಸಾಕು ಅಂತ ಇವರ ಅಂಬೋಣ!

ಸಂಕಟದ ಸಮಯದಲ್ಲಿ ಹೆಚ್ಚಿನ ತ್ಯಾಗವನ್ನ ನಾವು ರಾಜಕಾರಣಿಗಳಿಂದ ಅಪೇಕ್ಷಿಸುತ್ತೇವೆ , ಟೀಕೆಯ ಸುರಿಮಳೆಯನ್ನೇ ಹರಿಸುತ್ತೇವೆ, ನಮಗೆ ಮಾತ್ರ ಅದು ಅನ್ವಯ ಆಗುವುದಿಲ್ಲ!ಅದಕ್ಕೆ ಅನ್ನೋದು 'ಹೇಳೋದ್ ವೇದ.......' ಅಂತ

Tuesday, October 13, 2009

ಎರೆಡು ದೇಹ ಎರೆಡು ಜೀವ!

It is said - 'In a team, if 02 people agree to each other on everything, then the team needs only one among those two, and if 02 people don't agree to each other on everything, they both are not required for the team :) !

Monday, October 12, 2009

मुझे फ़खीर बनादे मौला..

A lot of us always want to declare things as 'right or wrong', 'true or false', 'white or black', 'agree or disagree'.

Would someone teach us to understand life situations without having to analyse?
To not rationalise emotions? To love madly?
To believe without proof? To not eat for days and just sing...and dance in the streets..
Not to hear, but listen. Not to talk and talk but convey..
Not to fight ..but have nothing to lose?

Would someone please teach us to be a Raadha?
To be a Fakhir?

मुझे फ़खीर बनादे मौला..

Sunday, October 11, 2009

"ಬೇಸರಾಗಿದೆ ಮಾತು, ಭಾರವಾಗಿದೆ ಮೌನ, ನೋವು ಕರಗಿದೆ ಕಣ್ಣಲಿ, ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೇ ಮುರಿದಂತೆ.."
'ಅಡಿಗರ ಸಾಲುಗಳು ಅಂತ ನೆನಪು, (ತಪ್ಪಿದ್ದರೆ ಹೇಳಿ), ಕೆಲವೊಮ್ಮೆ ಮೇಲಿನ ಸಾಲುಗಳು ವ್ಯಕ್ತಿಯ ದುಗುಡವನ್ನ ಬಹಳವೇ ಸರಿಯಾಗಿ ವ್ಯಕ್ತಪಡಿಸುತ್ತವೆ, ಪ್ರತಿಬಿಮ್ಬಿಸ್ತಾವೆ.