Thursday, February 28, 2013

ಚೇತನ - ಅನಿಕೇತನ

ಎಲ್ಲರಿಗೂ ನಮಸ್ಕಾರ

ವರುಷಗಳೇ ಸಂದವು ಬರೆಯದೆ -ಬರೆಯಲಿಲ್ಲ ಅಂತ  ಹೇಳಲೆ?ಅಲ್ಲ ಹಂಚಿಕೊಳ್ಳುವ ಮನಸ್ಸಿರಲಿಲ್ಲ ಅನ್ನಲೇ ?,ಮನದ ನೂರು ಕದಲಿಕೆಗಳ ಹಂಚಿಕೊಳ್ಳುವುದಕ್ಕೂ ಒಂದು ರೀತಿಯ ಆಸಕ್ತಿ ಬೇಕು- ಹಂಚಿಕೊಂಡಾಗ ಬರುವ ಹತ್ತು ಹಲವು ದೃಷ್ಟಿಕೋನಗಳ ಆಸ್ವಾದಿಸುವ ಉತ್ಸಾಹ ಬೇಕು - ಇವ್ಯಾವುದೂ ಇರಲಿಲ್ಲ ನನ್ನಲ್ಲಿ.

ಆಹಾ !ಎಷ್ಟು ಚೆಂದ ಅನ್ನುತ್ತಿರುವಾಗಲೇ ಓಹೋಹೋ ಬದುಕು ಅಂದರೆ ಬರೇ ದುಃಖ - ಹೀಗೆ ಇನ್ನು ಯಾವಾಗ ಬದುಕಿನ ಚುಕ್ಕಾಣಿ ಹಿಡಿಯುತ್ತೇನೋ ಅನ್ನುವ ಆಸೆಯೂ ಬರದಿರುವಂತ ಪರಿಸ್ಥಿತಿ...

ಈಗ ಒಂದು ರೀತಿಯ ಸಮ ಚಿತ್ತ, ಹಾಗಾಗಿ ಪುನಃ ಜೀವನ ಪುಟಗಳನ್ನ ತಿರುವಬಹುದು, ಸಹೃದಯರೊಂದಿಗೆ ಪಯಣಿಸಬಹುದು ಎಂಬ ಹೊಸ ಹುರುಪು.

ಗೀತೆ