ಈ ಕಂಪ್ಯೂಟರ್ ನ 'undo ' ಆಪರೇಷನ್ ಎಷ್ಟು ತಲೆಗೆ ಹೊಕ್ಕಿದೆ ಅಂದ್ರೆ ಕೆಲವೊಮ್ಮೆ ಕೈ ತಪ್ಪಿ ಏನಾದರೂ ಆದರೆ 'undo ' option ಇದ್ದಿದ್ದರೆ ಅಂತ ಅನ್ನಿಸತ್ತೆ.
ಜೀವನದಲ್ಲಿ ಕೂಡ ಹಾಗೇ ಅಲ್ವ?- ಕಾಲ ಚಕ್ರ ಮುಂದುವರಿತಾನೆ ಇರುತ್ತೆ....ಇಷ್ಟ ಇರಲಿ/ಇಲ್ಲದೆ ಇರಲಿ...ಹಿಂದೆ ತಿರುಗಿಸುವ ಹಾಗಿದ್ದರೆ ಅಂತ ಎಷ್ಟೋ ಬಾರಿ ಹಪಹಪಿಸಿದ್ದಿದೆ.
'ಮಾತು ಆಡಿದರೆ ಹೋಯ್ತು ....' ಅಂತ ಬಲ್ಲವರು ಹೇಳ್ತಾರೆ,,,ಅಯ್ಯೋ ವಾಪಸ್ಸು ತಗೊಳ್ಳುವ ಹಾಗಿದ್ದಿದರೆ...
ಅಚಾತುರ್ಯದಿಂದ ಘಟಿಸಿದ ಕಾರ್ಯಗಳ ಪುನಃ ಶೂನ್ಯ ಬಿಂದುವಿಗೆ ತರುವ ಹಾಗಿದ್ದಿದ್ದರೆ....
ಖುಷಿ ಕೊಡುವ ಕಾರ್ಯಗಳನ್ನ, ಮಾತುಗಳನ್ನ ಮೆಲುಕು ಹಾಕಿದಷ್ಟೂ ಮನಸ್ಸಿಗೆ ಹಿತ, ಅದರ ಪ್ರಭಾವವನ್ನ, ಪರಿಣಾಮವನ್ನ ಸುತ್ತಮುತ್ತಲಿದ್ದವರೂ ಅನುಭವಿಸುತ್ತಾರೆ, ಆ ಅನುಭೂತಿಯನ್ನ ವೈಪರೀತ್ಯಕ್ಕೆ ಕೊಂಡು ಹೋಗುವ ಸಾಮರ್ಥ್ಯವೂ ನಮ್ಮಲ್ಲಿದೆ- ಸಮಯಾ ಸಮಯದ ಪರಿವೆ ನಮ್ಮ ಮಾತು-ಕೃತಿಗಳ ಮೇಲಿದ್ದರೆ,,,,ಅಯ್ಯೋ 'undo ' option ಇದ್ದಿದ್ದರೆ ಅನ್ನುವ ಗೋಳು ತಪ್ಪಿಸಬಹುದೋ ಏನೋ !
ನಮಸ್ಕಾರ :) 'ನಮ್ಮ ಮಧ್ಯೆ' ಹೆಸರೇ ಹೇಳುವಂತೆ ಇದು 'ನನ್ನ' ಮತ್ತು 'ನಿಮ್ಮ' ನಡುವಿನ ಸಂವಾದ. ಈ ಸಂಭಾಷಣೆಗೆ ಪ್ರೇರಣೆ 'ಉಷೆ', ನನ್ನ ಸ್ನೇಹಿತೆಯ ಸಹೋದರಿ. ನನ್ನೆದೆಯ ಕದಲಿಕೆಗಳ ನಿಮ್ಮ ಮುಂದಿಡುವ ಅಸೆ, ನಿಮ್ಮಲ್ಲಿ ಹಂಚಿಕೊಳ್ಳುವ ಅಸೆ, ನಿಮ್ಮ ಸಹಕಾರದಿಂದ ಅದನ್ನು ಅಕ್ಷರಗಳಲ್ಲಿ ಕೂಡಿಡುವ ಬಯಕೆ, ಈ ನನ್ನ ಬಯಕೆಯ ಮೊಳಕೆಗೆ ನೀರೆರೆದು ಪೂಶಿಸುತ್ತೀರೆಂದು ನನ್ನ ನಂಬಿಕೆ... ಭಾವನೆಗಳ, ಅನಿಸಿಕೆಗಳ ತೆರೆದಿಡ ಬಯಸುವ ಎಲ್ಲರೂ ಈ ವೇದಿಕೆಯನ್ನು ಉಪಯೋಗಿಸಬಹುದು.... 'ಗೀತೆ':)
Wednesday, January 6, 2010
Tuesday, December 29, 2009
ಯಾಕೆ ಹೀಗೆ !
ವಾರ್ತೆಯಲ್ಲಿ ಕೇಳಿದೆ-ವಿಷ್ಣುವರ್ಧನ ಇನ್ನಿಲ್ಲ ಅಂತ-ಮುಂದುವರಿದು ಶಾಲೆಗೆ ರಜೆ ಅಂತಲೂ ಕೇಳಿದೆ!, ಹಾಗೆ ನಮ್ಮ ಅಶ್ವಥರೂ ಇನ್ನಿಲ್ಲ...
ರಜೆ ಘೋಷಿಸಿ ಏನು ತೋರಿಸಿದಂತಾಯಿತು? ಏನೋ ನನ್ನ ಮನಸ್ಸಿಗೆ ಇದು ಸರಿ ಕಾಣುವುದಿಲ್ಲ, ಎಲ್ಲದರಲ್ಲೂ ಸ್ಪರ್ಧೆಯೇ ಹೊರತು ಬೇರೇನೂ ಇಲ್ಲ...ನಮ್ಮ ಪ್ರತಿಕ್ರಿಯೆಗಳು ಯಾವ ರೂಪ ಪಡಕೊಂಡಿದೆ ಅಂತ ಯೋಚಿಸಿದರೆ ಖೇದವಾಗುತ್ತದೆ...
ನಿಮಗೇನು ಅನಿಸುತ್ತದೆ-ನನ್ನ ಯೋಚನಾ ಲಹರಿ?
ರಜೆ ಘೋಷಿಸಿ ಏನು ತೋರಿಸಿದಂತಾಯಿತು? ಏನೋ ನನ್ನ ಮನಸ್ಸಿಗೆ ಇದು ಸರಿ ಕಾಣುವುದಿಲ್ಲ, ಎಲ್ಲದರಲ್ಲೂ ಸ್ಪರ್ಧೆಯೇ ಹೊರತು ಬೇರೇನೂ ಇಲ್ಲ...ನಮ್ಮ ಪ್ರತಿಕ್ರಿಯೆಗಳು ಯಾವ ರೂಪ ಪಡಕೊಂಡಿದೆ ಅಂತ ಯೋಚಿಸಿದರೆ ಖೇದವಾಗುತ್ತದೆ...
ನಿಮಗೇನು ಅನಿಸುತ್ತದೆ-ನನ್ನ ಯೋಚನಾ ಲಹರಿ?
Thursday, December 24, 2009
ಹೊಸ ವರುಷ :)
ಭೌತಿಕವಾಗಿ ಎಲ್ಲ ದಿನಗಳೂ ಬಹುತೇಕ ಒಂದೇ ಆಗಿರುತ್ತವೆ. ಆಯಾ ದಿನದ ಮಹತ್ವ, ಭಾವನಾತ್ಮಕವಾಗಿ ನಿರ್ಧರಿಸಲ್ಪಡುತ್ತದೆ. ಮಾನವನ ಮನಸ್ಸಿಗೆ ಇರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ.'ಹುಟ್ಟಿದ ದಿನ', ಸ್ವಾತಂತ್ರದ ದಿನ', ಹುತಾತ್ಮರ ದಿನ', ...ಹೀಗೆ. ನಾವೇ ನಿರ್ಮಿಸಿದಂತಹ ಈ ದಿನಗಳಿಗೆ ನಮ್ಮ ಮನಸ್ಸು ಎಷ್ಟರ ಮಟ್ಟಿಗೆ ಹೊಂದಿಕೊಂಡಿದೆ ಅಂತ ಯೋಚಿಸಿದರೆ ಬಹಳ ಅಚ್ಚರಿ ಎನಿಸುತ್ತದೆ.
'ಹೊಸ ವರುಷ'- ಹತ್ತಿರ ಬರುತ್ತಾ ಇದೆ, ಹೊಸ ಕನಸುಗಳು, ಯೋಜನೆಗಳು, ಉತ್ಸಾಹ,...ಎಲ್ಲರಲ್ಲಿ...ದಶಂಬರದಲ್ಲೂ ಮಾಡಬಹುದಾದ ಕಾರ್ಯಗಳನ್ನ ಜನವರಿ ಒಂದಕ್ಕೆ ಮಾಡುವುದರಲ್ಲಿ ಏನೋ ಖುಷಿ! ಕೆಲವೊಮ್ಮೆ ಅನಿಸುತ್ತದೆ-ಇದು ಒಂದು ರೀತಿಯ ಪಲಾಯನ ವಾದ ಅಂತ, ಮತ್ತೆ ಯೋಚಿಸುತ್ತೇನೆ-'ಅಯ್ಯೋ ಗೀತ ಅಷ್ಟು ಯೋಚಿಸಬೇಡ ಅಂತ'....
"ಏನೇ ಆಗಲಿ, ಹೊಸ ವರುಷ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ, ಎಲ್ಲೆಲ್ಲಿಯೂ ಶಾಂತಿ-ನೆಮ್ಮದಿ ಇರಲಿ "
'ಹೊಸ ವರುಷ'- ಹತ್ತಿರ ಬರುತ್ತಾ ಇದೆ, ಹೊಸ ಕನಸುಗಳು, ಯೋಜನೆಗಳು, ಉತ್ಸಾಹ,...ಎಲ್ಲರಲ್ಲಿ...ದಶಂಬರದಲ್ಲೂ ಮಾಡಬಹುದಾದ ಕಾರ್ಯಗಳನ್ನ ಜನವರಿ ಒಂದಕ್ಕೆ ಮಾಡುವುದರಲ್ಲಿ ಏನೋ ಖುಷಿ! ಕೆಲವೊಮ್ಮೆ ಅನಿಸುತ್ತದೆ-ಇದು ಒಂದು ರೀತಿಯ ಪಲಾಯನ ವಾದ ಅಂತ, ಮತ್ತೆ ಯೋಚಿಸುತ್ತೇನೆ-'ಅಯ್ಯೋ ಗೀತ ಅಷ್ಟು ಯೋಚಿಸಬೇಡ ಅಂತ'....
"ಏನೇ ಆಗಲಿ, ಹೊಸ ವರುಷ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ, ಎಲ್ಲೆಲ್ಲಿಯೂ ಶಾಂತಿ-ನೆಮ್ಮದಿ ಇರಲಿ "
Sunday, December 13, 2009
ನಿವೇದನೆ
ಸಾಕುಪ್ರಾಣಿ-ಪಕ್ಷಿಗಳ ಅಳಲು ಹೀಗಿರಬಹುದೋ ಏನೋ ಅಂತ ಅನಿಸಿದಾಗ ಬರೆದದ್ದು -
"ಬಂಧಿಸಿಡದಿರಿ ನನ್ನ
ಭಾವಚಿತ್ರದ ಚೌಕಟ್ಟಿನೊಳಗೆ
ಸುಂದರವಾದ ಕಲಾಕೃತಿ ಆಗಬೇಕೆಂಬ
ಹಂಬಲ ನನಗಿಲ್ಲ
ಜನಮನ ಸೂರೆಗೊಳ್ಳುವ ಅಂದ
ಬೇಕೆಂಬ ಆಸೆ ನನಗಿಲ್ಲ
ಮತ್ತೇನು ಬೇಡ ನನಗೆ
ಕೊಡುವಿರಾದರೆ ಬಿಟ್ಟುಕೊಡಿ
ಸ್ವಚ್ಚಂದ ಆಗಸದಡಿ ಮನಸೋ ಇಚ್ಚೆ
ಪ್ರಕೃತಿಯ ಅನುಭಸುವ ಅನುಭೂತಿಯ"
"ಬಂಧಿಸಿಡದಿರಿ ನನ್ನ
ಭಾವಚಿತ್ರದ ಚೌಕಟ್ಟಿನೊಳಗೆ
ಸುಂದರವಾದ ಕಲಾಕೃತಿ ಆಗಬೇಕೆಂಬ
ಹಂಬಲ ನನಗಿಲ್ಲ
ಜನಮನ ಸೂರೆಗೊಳ್ಳುವ ಅಂದ
ಬೇಕೆಂಬ ಆಸೆ ನನಗಿಲ್ಲ
ಮತ್ತೇನು ಬೇಡ ನನಗೆ
ಕೊಡುವಿರಾದರೆ ಬಿಟ್ಟುಕೊಡಿ
ಸ್ವಚ್ಚಂದ ಆಗಸದಡಿ ಮನಸೋ ಇಚ್ಚೆ
ಪ್ರಕೃತಿಯ ಅನುಭಸುವ ಅನುಭೂತಿಯ"
Friday, November 27, 2009
ಧರ್ಮದ ಸರಳ ವ್ಯಾಖ್ಯಾನ :)
ನಗುವು ಸಹಜದ ಧರ್ಮ; ನಗಿಸುವುದು ಪರ ಧರ್ಮ|
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವು ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ||
-ಡಿವಿಜಿ
ನಗುವ ಕೇಳುತ ನಗುವುದತಿಶಯದ ಧರ್ಮ||
ನಗುವು ನಗಿಸುವ ನಗಿಸಿ ನಗುತ ಬಾಳುವ ವರವ|
ಮಿಗೆ ನೀನು ಬೇಡಿಕೊಳೋ - ಮಂಕುತಿಮ್ಮ||
-ಡಿವಿಜಿ
Monday, November 16, 2009
ತಾಯೇ ಇಳಿದು ಬಾ..
ಇತ್ತೀಚಿಗೆ ನನ್ನನ್ನು ಬಾಧಿಸುತ್ತಿರುವ ಸಂಗತಿ - ಪ್ರಕ್ಷುಬ್ಧ ಸಾಮಾಜಿಕ ಸಂಬಂಧಗಳು.
ಮನುಷ್ಯ ಮನುಷ್ಯರ ನಡುವೆ ಬತ್ತಿಹೋಗುತ್ತಿರುವ ವಿಶ್ವಾಸ, ಎಲ್ಲೆಲ್ಲೂ ಕಡಿಮೆಯಾಗುತ್ತಿರುವ 'ನಂಬಿಕೆ', ಹೆಚ್ಚು-ಕಡಿಮೆ ಎಂದು ಅಳೆಯುವ ಪೈಪೋಟಿ, ಅವನನ್ನು ಕೆಳಗೆಳೆದರೆ ಮಾತ್ರ ನಾನು ಮೇಲೇರಬಹುದೆಂಬ ಲಫಂಗತನ,.. ಮೋಸ, ದ್ವೇಷ, ಅಪನಂಬಿಕೆ.. ಇವೆಲ್ಲವನ್ನೂ ಮೀರಿ 'ಏನಾದರೆ ನನಗೇನು' ಎಂಬ indifference. ಒಬ್ಬರಿಗೊಬ್ಬರು ಸಹಕರಿಸಿ, ಪ್ರೀತಿಯಿಂದ, ಸಹನೆಯಿಂದ, ಹಿಂಸೆಮಾಡದೆ ಬದುಕುವಂತೆ ಆಗುವ ನಿಟ್ಟಿನಲ್ಲಿ ನಾನು ಏನೇ ಮಾಡಲು ಸಾಧ್ಯವಿದ್ದರೂ ಮಾಡಬೇಕೆನಿಸುತ್ತೆ... ಏನು ಮಾಡಲಿ?
Monday, November 9, 2009
ಹೀಗೆ...
ಇವತ್ತು ತಲೆ ಬಾಚುವಾಗ ಮನಸ್ಸಿಗೆ ಹೊಳೆದದ್ದು :) - 'ಕೂದಲು ಗಂಟು ಗಂಟಾಗಿತ್ತು, ಯಾವತ್ತು ಉಪಯೋಗಿಸುವ ಬಾಚಣಿಗೆ ಸರಿಯಾಗಲಿಲ್ಲ,ಹಣಿಗೆಯ ಹಲ್ಲುಗಳ ಮಧ್ಯೆ ಹೆಚ್ಚಿನ ಜಾಗ ಇರಬೇಕು, ಆಗ ಗಂಟು ನೋವಾಗದಂತೆ ಬಿಡಿಸಬಹುದು ಅಂತ ಹಣಿಗೆ ಬದಲಾಯಿಸಿದೆ'- ಜೀವನದಲ್ಲೂ ಅಷ್ಟೆ, ಸಮಸ್ಯೆಗಳ ಅಳಕ್ಕೆ ತಕ್ಕಂತೆ, ಪರಿಹಾರ ವಿಧಾನವೂ ಬದಲಾಗುತ್ತದೆ,....ಆದರೆ ಯಾವ ರೀತಿಯ ಪರಿಹಾರ ಬೇಕು ಅನ್ನುವುದರ ಸ್ಪಷ್ಟತೆಯೂ ಅಗತ್ಯ....ಸಿಕ್ಕಾದ ಕೂದಲನ್ನು ಕತ್ತರಿಸಿದರೂ ಸಿಕ್ಕು ಬಿಡುತ್ತದೆ, ಗಂಟಿಲ್ಲದೆ, ಹಾಗೆಯೇ ಪಲಾಯನ ಮಾಡದೇ ಸಮಸ್ಯಗಳ ಸುಳಿಯಿಂದ ಹೊರ ಬರಲಿಕ್ಕೆ ಅದಕ್ಕೆ ತಕ್ಕುದಾದ ಪರಿಹಾರ ಹುಡುಕುತ್ತಾ ಮುಂದೆ ಸಾಗುವುದೇ ಸುಖೀ ಜೀವನದ ರಹಸ್ಯ :)
Subscribe to:
Posts (Atom)