"ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ "
-ಡಿ.ವಿ.ಜಿ
ಹೊಂದಾಣಿಕೆ ಮತ್ತು ಲೀನವಾಗುವುದು ಅನ್ನೋದನ್ನ ಕವಿ ಒಂದೇ ಪ್ರಕ್ರಿಯೆ ಅಂತ ಬರೀತಾರೆ. ಇಲ್ಲಿ ಜೀವನದ ಸಿಹಿ ಕಹಿಗೆ ಹೇಗೆ ಸ್ಪಂದಿಸಬೇಕು ಅನ್ನೋದನ್ನ ಹೇಳ್ತಾ ಇರುವ ಹಾಗೆಯೇ 'ತಾನು' ಅನ್ನುವ ಚೌಕಟ್ಟಿನ ಹೊರಗೆ ಬರುವ ಪ್ರಕ್ರಿಯೆಗೆ ನಾಂದಿ ಹಾಕುತ್ತಾರೆ.
ನಮಸ್ಕಾರ :) 'ನಮ್ಮ ಮಧ್ಯೆ' ಹೆಸರೇ ಹೇಳುವಂತೆ ಇದು 'ನನ್ನ' ಮತ್ತು 'ನಿಮ್ಮ' ನಡುವಿನ ಸಂವಾದ. ಈ ಸಂಭಾಷಣೆಗೆ ಪ್ರೇರಣೆ 'ಉಷೆ', ನನ್ನ ಸ್ನೇಹಿತೆಯ ಸಹೋದರಿ. ನನ್ನೆದೆಯ ಕದಲಿಕೆಗಳ ನಿಮ್ಮ ಮುಂದಿಡುವ ಅಸೆ, ನಿಮ್ಮಲ್ಲಿ ಹಂಚಿಕೊಳ್ಳುವ ಅಸೆ, ನಿಮ್ಮ ಸಹಕಾರದಿಂದ ಅದನ್ನು ಅಕ್ಷರಗಳಲ್ಲಿ ಕೂಡಿಡುವ ಬಯಕೆ, ಈ ನನ್ನ ಬಯಕೆಯ ಮೊಳಕೆಗೆ ನೀರೆರೆದು ಪೂಶಿಸುತ್ತೀರೆಂದು ನನ್ನ ನಂಬಿಕೆ... ಭಾವನೆಗಳ, ಅನಿಸಿಕೆಗಳ ತೆರೆದಿಡ ಬಯಸುವ ಎಲ್ಲರೂ ಈ ವೇದಿಕೆಯನ್ನು ಉಪಯೋಗಿಸಬಹುದು.... 'ಗೀತೆ':)
Thursday, October 29, 2009
Friday, October 16, 2009
Empathy!
ನಾನು ಒಮ್ಮೆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಾಗ ನಡೆದ ಘಟನೆ- ಒಂದು ನಾಯಿ ಮರಿ, ರಸ್ತೆಯನ್ನ ದಾಟುವುದಕ್ಕೆ ಪ್ರಯತ್ನಿಸ್ತಾ ಇತ್ತು, ಆದರೆ ಅದಕ್ಕೆ ಕಾಲು ಊನ, ಹಾಗಾಗಿ ಬಹಳವೇ ಕಷ್ಟಪಟ್ಟು ನಡೆಯಲು ಪ್ರಯತ್ನಿಸುತ್ತಾ ಇತ್ತು, ನಿಂತ ನನ್ನಂತ ಅನೇಕರಿಗೆ ತಳಮಳ-'ಇನ್ನೇನು ಸಿಗ್ನಲ್ ಟೈಮ್ ಆಗುತ್ತೆ, ನಾಯಿ ಇನ್ನು ಅರ್ಧ ದಾರಿ ಕ್ರಮಿಸಿದೆಯಷ್ಟೇ ' ಅಂತ...ಎಲ್ಲಿಂದಲೋ ಒಬ್ಬ ಪುಣ್ಯಾತ್ಮ, ಬಂದು ಆ ಮರಿಯನ್ನ ಎತ್ತಿಕೊಂಡು ಹೊರಟರು, ನಾನು ನೆಮ್ಮದಿಯ ನಿಟ್ಟುಸಿರು ಬಿಟ್ಟು ಹೊರಟೆ, ಹಾಗೆ ಹೋಗುತ್ತಾ ರಸ್ತೆಯ ಬದಿಗೆ ಹೊರಳಿ ನೋಡಿದೆ-ನಾಯಿಯನ್ನ ಕೆಳಗಿಳಿಸಿದರು ಅವರು, ತಾವು ನಡೆದುಕೊಂಡು ಹೊರಟರು, ಆಗ ಗಮನಿಸಿದೆ- ಆ ವ್ಯಕ್ತಿಗೂ ಕಾಲು ಊನ ಅಂತ! ನನ್ನ ಮನಸಿನಲ್ಲಿ ಈ ಘಟನೆ ಉಳಿದು ಹೋಗಿದೆ-ಕೆಲವರೇ ಮಹಾತ್ಮರು ಯಾಕೆ ಆಗುತ್ತಾರೆ ಅಂತಲೂ ನನಗೆ ತಿಳಿವು ನೀಡಿದ ಘಟನೆ ಇದು.
Thursday, October 15, 2009
ಮನುಷ್ಯ -ವಿರೋಧಾಭಾಸಗಳ ಗೂಡು!
'ನೆರೆ-ಹಾವಳಿ '.....ಎಲ್ಲರ ಬಾಯಲ್ಲಿಯೂ ಸಂತಾಪ, ಅಸಂಖ್ಯಾತ ಜನರು ಸಹಾಯ ಹಸ್ತ ಚಾಚಿದ್ದಾರೆ. ಆದರೆ ದಿನದಲ್ಲಿ ಎರೆಡು ಗಂಟೆ ಹೆಚ್ಚು ದುಡಿಯಬೇಕೆಂದ ಕೂಡಲೇ ಏನಿದು ಅಪಸ್ವರ!ಅದೂ ಒಂದು ನಿರ್ಧಿಷ್ಟ ಅವಧಿಯವರೆಗೆ ಮಾತ್ರ. 'ಅದು ಅವೈಜ್ಞಾನಿಕ' ಅಂತ ಕೂಡ ವಿಮರ್ಶಿಸಿದ್ದಾರೆ, ಆಯಾ ಪ್ರದೇಶದ ಜನರು ಮಾತ್ರ ದುಡಿದರೆ ಸಾಕು ಅಂತ ಇವರ ಅಂಬೋಣ!
ಸಂಕಟದ ಸಮಯದಲ್ಲಿ ಹೆಚ್ಚಿನ ತ್ಯಾಗವನ್ನ ನಾವು ರಾಜಕಾರಣಿಗಳಿಂದ ಅಪೇಕ್ಷಿಸುತ್ತೇವೆ , ಟೀಕೆಯ ಸುರಿಮಳೆಯನ್ನೇ ಹರಿಸುತ್ತೇವೆ, ನಮಗೆ ಮಾತ್ರ ಅದು ಅನ್ವಯ ಆಗುವುದಿಲ್ಲ!ಅದಕ್ಕೆ ಅನ್ನೋದು 'ಹೇಳೋದ್ ವೇದ.......' ಅಂತ
ಸಂಕಟದ ಸಮಯದಲ್ಲಿ ಹೆಚ್ಚಿನ ತ್ಯಾಗವನ್ನ ನಾವು ರಾಜಕಾರಣಿಗಳಿಂದ ಅಪೇಕ್ಷಿಸುತ್ತೇವೆ , ಟೀಕೆಯ ಸುರಿಮಳೆಯನ್ನೇ ಹರಿಸುತ್ತೇವೆ, ನಮಗೆ ಮಾತ್ರ ಅದು ಅನ್ವಯ ಆಗುವುದಿಲ್ಲ!ಅದಕ್ಕೆ ಅನ್ನೋದು 'ಹೇಳೋದ್ ವೇದ.......' ಅಂತ
Tuesday, October 13, 2009
ಎರೆಡು ದೇಹ ಎರೆಡು ಜೀವ!
It is said - 'In a team, if 02 people agree to each other on everything, then the team needs only one among those two, and if 02 people don't agree to each other on everything, they both are not required for the team :) !
Monday, October 12, 2009
मुझे फ़खीर बनादे मौला..
A lot of us always want to declare things as 'right or wrong', 'true or false', 'white or black', 'agree or disagree'.
Would someone teach us to understand life situations without having to analyse?
To not rationalise emotions? To love madly?
To believe without proof? To not eat for days and just sing...and dance in the streets..
Not to hear, but listen. Not to talk and talk but convey..
Not to fight ..but have nothing to lose?
Would someone please teach us to be a Raadha?
To be a Fakhir?
मुझे फ़खीर बनादे मौला..
Sunday, October 11, 2009
Friday, October 9, 2009
'ಹುಟ್ಟು' 'ಸಾವು' ಯಾರ ಕೈಯಲ್ಲೂ ಇಲ್ಲ ಅನ್ನುವುದನ್ನ ದೈನಂದಿನ ಜೀವನದಲ್ಲಿ ಕಾಣ್ತಾನೆ ಇರ್ತಿವಿ...YSR ಹಾಗೆ ಪ್ರಸ್ತುತ ಪ್ರವಾಹದಲ್ಲಿ ಆದ ಪ್ರಾಣಹಾನಿ, ಅಪಘಾತಗಳು, ಹೀಗೆ...ಆದರೆ ಯಾರ ಜೀವಕ್ಕೆ ಹೆಚ್ಚು ಬೆಲೆ ಅಂತ ಯಾರಿಗಾದರೂ ನಿರ್ಧರಿಸುವ ಹಕ್ಕಿದೆಯ? ವ್ಯಕ್ತಿಯೋರ್ವ ಉನ್ನತ ಸ್ಥಾನದಲ್ಲಿದ್ದಾನೆ ಅಂದ ಕೂಡಲೇ, ಅವನ ಪ್ರಾಣ ಕಾಪಾಡಲಿಕ್ಕೆ ಏನೆಲ್ಲ ಮಾಡಬಹುದೋ ಎಲ್ಲವನ್ನೂ ಮಾಡುವುದು, ಮಾಡಲಿ ಒಳ್ಳೆಯದೇ, ಆದರೆ ಅದರಷ್ಟಲ್ಲವಾದರೂ ಅದರ ಅರ್ಧದಷ್ಟದರೂ ಪ್ರಯತ್ನ ಸಾಮಾನ್ಯ ಜನರಿಗೆ ಮಾಡುವುದಿಲ್ಲ ಏಕೆ? ಅದರಲ್ಲೂ ತಮ್ಮ ಸ್ವಾರ್ಥ ಸಾಧನೆ ನೋಡಬೇಕೇ? ನಮ್ಮ ವ್ಯವಸ್ಥೆಯ ದುರಂತ :(
Subscribe to:
Posts (Atom)